ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಭೇಟಿನೀಡಿದ ದುನಿಯಾ ವಿಜಯ್ ,,ಶವಾಗಾರದಲ್ಲಿ ಕೆಲಸ ಮಾಡುವವರ ಬಗ್ಗೆ ಮನ ಕಲಕುವಂತ ಮಾತುಗಳು



ದುನಿಯಾ ವಿಜಯ್ : ದುನಿಯಾ ವಿಜಯ್ ಎಂದರೆ ಕಟುಮಸ್ತಾದ ದೇಹ ಕಾಣೋಕೆ ರಫ್ ಅಂಡ್ ಟಫ್ 
ಯಾವಾಗ್ಲೂ ಸಿಂಪಲ್ ಆಗಿ ಇರುವ ದುನಿಯಾ ವಿಜಯ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಭೇಟಿನೀಡಿದಾಗ ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಮಾತನಾಡುವಾಗ ಅಲ್ಲಿನ ಕಾರ್ಮಿಕರ ಬಗ್ಗೆ ಹೆಲ್ಲಿದ್ದು ಹೀಗೆ ⬇️
ದುನಿಯಾ ವಿಜಯ್,ದುನಿಯಾ,ದುನಿಯಾ ವಿಜಯ್ಯ್ ಸಲಗ ,ಸಲಗ, ಸಾಲಗ  updates,salaga updates
ಈ ಪೋಟೋದಲ್ಲಿರುವವರನ್ನು ನಾನು ಪುಣ್ಯಾತ್ಮರು ಎನ್ನುತ್ತೇನೆ. ಏಕೆಂದರೆ ಇವರು ಮಾಡುವುದು ಪುಣ್ಯದ ಕೆಲಸ. ನಾವು ಐದು ನಿಮಿಷವೂ ನಿಲ್ಲಲು ಆಗದ ಜಾಗದಲ್ಲಿ ಇವರು ಪ್ರತಿ ದಿನ ಕೆಲಸ ಮಾಡುತ್ತಾರೆ. ಹೌದು ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುವವರು. ಇವರ ಜತೆ ಮಾತನಾಡುತ್ತಾ ಒಂದು ವಿಷಯ ತಿಳಿಯಿತು. ಇವರು ಯಾರ ಹೆಣಗಳನ್ನಸುಲಭವಾಗಿ ಪೋಸ್ಟ್‌ ಮಾರ್ಟಂ ಮಾಡುತ್ತಾರಂತೆ, ಆದರೆ ಆತ್ಮಹತ್ಯೆಗೆ ಶರಣಾದ ಯುವಕ ಯುವತಿಯರ ಮರಣೋತ್ತ ಪರೀಕ್ಷೆ ಮಾಡುವಾಗ ಬಹಳ ನೊಂದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಇಂದಿನ ಯುವಕ ಯುವತಿಯರು, ಲವ್‌ ಫೆಲ್ಯೂರ್‌, ಜೀವನದಲ್ಲಿ ಅಂದುಕೊಳ್ಳದೇ ಹೋದದ್ದು ಆಗದೇ ಇದ್ದಾಗ, ಮತ್ತು ಕ್ಷುಲ್ಲಕ ಕಾರಣಗಳಿಗೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ. ಯಾರ ಹೆತ್ತ ಮಕ್ಕಳೋ ಆದರೆ ಇವರಿಗೂ ಅವರ ಸಾವನ್ನು ಕಂಡರೆ ನೋವಾಗುತ್ತದೆ ಎಂದರೆ, ಸ್ವಂತ ತಂದೆ ತಾಯಿ ಬಂಧ ಬಳಗದವರ ನೋವು ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಊಹಿಸಿಕೊಳ್ಳಬೇಕು. ಇವರು ನೊಂದು ಕೊಂಡು ಮರೋಣತ್ತರ ಪರೀಕ್ಷೆ ಮಾಡುವ ಹೆಣಗಳಲ್ಲಿ ರೌಡಿಸಂಗೆ ಬಲಿಯಾದ ಯುವಕರೂ ಇದ್ದಾರಂತೆ. ಹಾಗಾಗಿ ಯುವಕ ಯುವತಿಯರೇ ಬದುಕು ನೀವು ಅಂದುಕೊಂಡಿದ್ದು ಸಿಗದೇ ಹೋದರೆ ಅಲ್ಲಿಗೆ ಕೊನೆಯಲ್ಲ ಇನ್ನೂ ಸಾಧಿಸುವುದು ಬಹಳಷ್ಟಿರುತ್ತದೆ. ಹಾಗಾಗಿ ನಿಮ್ಮ ಸಮಯ ಬರುವ ವರೆಗೂ ಕಾಯಿರಿ, ಸುಖಾ ಸುಮ್ಮನೆ ಮನೆಯವರಿಗೆ ನೋವು, ದುಃಖವನ್ನು ನೀಡಬೇಡಿ. ಈ ಪುಣ್ಯಾತ್ಮರ ಜತೆ ಒಂದಷ್ಟು ಸಮಯ ಕಳೆದಿದ್ದುನನ್ನ ಬದುಕಿನ ವಿಶೇಷ ಕ್ಷಣಗಳಲ್ಲಿ ಒಂದಾಗಿ ದಾಖಲಾಗಿದೆ

Comments